Sunday, February 21, 2016

ದಾರಿ ತೋರುತಿದೆ ಯಾರೋ ಹಚ್ಚಿದ ಹಣತೆ,
ಕಣ್ಣ ಒರೆಸುತಿದೆ  ಯಾರದೋ ಕವಿತೆ.
ಬಳಲಿ ಬೆಂಡಾಗಿ,ಭಾವ ಒಣಗಿರುವಾಗ,
ಹಸಿರತಂದಿದ್ದು ಯಾವ ಒರತೆ?.

ದಾರಿಯುದ್ದಕ್ಕೂ ಯಾರು ಚೆಲ್ಲಿದ ನೆರಳು
ದನಿಗೂಡಿಸಿದ್ದು ಎಸ್ಟೊಂದು ಕೊರಳು.
ತುತ್ತ ನೀಡಿದ್ದು ಇನ್ಯಾರೋ ಬಸಿದ ಬೆವರು....

ಯಾರು ತುಂಬಿದ ಬಣ್ಣವೋ ಏನೋ,
ರಂಗಾಗಿದೆ ಬಾಳ ರಂಗವಲ್ಲಿ,
ಬಣ್ಣ ಮಾಸಲೂಬಹುದು ಮುಂದೆ,
ಆದರೂ ಬದುಕು ಚೆಂದವಿಲ್ಲಿ.

ಯಾರೋ ನೀಡಿದ ಹೆಸರು,
ಯಾರದೋ ಉಸಿರು,
ನಾನೆಂಬುದೊಂದು ನೆಪಮಾತ್ರವಿಲ್ಲಿ.

No comments:

Post a Comment